ಬೆಂಕಿ ಹತ್ತಿದ್ದ ಟೈರ್ ಮೇಲೆ ಜಿಗಿದು ರಮೇಶ್ ಬೆಂಬಲಿಗನ ಹುಚ್ಚಾಟ…!
ರಮೇಶ್ ರಾಸಲೀಲೆ ಸಿಡಿ ವಿಚಾರಕ್ಕೆ ಸಂಬಂಧಿಸಿದಂತೆ ಬೆಳಗಾವಿಯ ಗೋಕಾಕ್ ನಲ್ಲಿ ರಮೇಶ್ ಬೆಂಬಲಿಗರ ಪ್ರತಿಭಟನೆ ವಿಕೋಪಕ್ಕೆ ತಿರುಗಿದ್ದು ಬೆಂಬಲಿಗನೊಬ್ಬ ಬೆಂಕಿ ಹತ್ತಿದ್ದ ಟೈರ್ ಮೇಲೆ ಜಿಗಿದು ಹುಚ್ಚಾಟ ಮೆರೆದಿದ್ದಾನೆ.
ಹೌದು… ಇಂದು ಬೆಳಿಗ್ಗೆಯಿಂದ ರಮೇಶ್ ಬೆಂಬಲಿಗರು ಬೃಹತ್ ಪ್ರತಿಭಟನೆಗೆ ಮುಂದಾಗಿದ್ದು ರಮೇಶ್ ಸಿಡಿ ವಿಚಾರಣೆಯಾಗಬೇಕು. ತನಿಖೆ ಪೂರ್ಣಗೊಳ್ಳುವವರೆಗೂ ಅವರ ಖಾತೆಯನ್ನು ಯಾರಿಗೂ ಹಂಚ ಕೂಡದು. ಸಿಡಿ ಸಿಬಿಐ ತನಿಖೆಗೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಬಸ್, ಕಾಲೇಜ್ ಬಂದ್ ಮಾಡಿದ ಪ್ರತಿಭಟನಾಕಾರರು ಟೈರ್ ಗೆ ಬೆಂಕಿ ಹಚ್ಚಿ ದೂರುದಾರ ದಿನೇಶ್ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ. ಈ ವೇಳೆ ಬೆಂಬಲಿಗನೊಬ್ಬ ಬೆಂಕಿ ಹತ್ತಿದ್ದ ಟೈರ್ ಮೇಲೆ ಜಿಗಿದು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ. ಸುಡು ಬಿಸಿಲಿನಲ್ಲಿ ಬೆಂಕಿ ಜೋರಾಗಿ ಆತನಿಗೆ ಹೊತ್ತುಕೊಂಡಿದೆ.
ತಕ್ಷಣಕ್ಕೆ ಎಚ್ಚೆತ್ತುಕೊಂಡ ಪೋಲೀಸರು ಆತನನ್ನು ಎಳೆದು ಬೆಂಕಿಯನ್ನು ಆರಿಸಿದ್ದಾರೆ. ಬೆಂಬಲಿಗನ ತೊಡೆಗೆ ಬೆಂಕಿ ಹತ್ತಿದ್ದರಿಂದ ತೊಡೆ ಭಾಗ ಸುಟ್ಟು ಕರಕಲಾಗಿದೆ. ಪ್ರಜ್ಞೆ ತಪ್ಪಿದ ಬೆಂಬಲಿಗನನ್ನು ಪೋಲೀಸರು ಕೂಡಲೇ ಅಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಿದ್ದಾರೆ.
ಒಂದು ವೇಳೆ ಪೋಲೀಸರು ಸಮಯಪ್ರಜ್ಞೆ ಮೆರೆಯದೇ ಹೋಗಿದ್ದರೆ ಬೆಂಬಲಿಗನ ಹುಚ್ಚಾಟಕ್ಕೆ ಪ್ರಾಣಕ್ಕೆ ಕುತ್ತು ಬರುವ ಸಾಧ್ಯತೆ ಹೆಚ್ಚಾಗಿತ್ತು. ಹೀಗಾದರೂ ಪ್ರತಿಭಟನಾಕಾರರು ಪ್ರತಿಭಟನೆ ಮಾತ್ರ ಕೈಬಿಟ್ಟಿಲ್ಲ.