ಬಂಗಾಳ: 2009ರ CPM ನಾಯಕನ ಹತ್ಯೆ ಪ್ರಕರಣ; TMC ಮುಖಂಡ ಛತ್ರಧರ್ ಮಹತೊ ಬಂಧನ!
ಪಶ್ಚಿಮ ಬಂಗಾಳದಲ್ಲಿ ಇದೀಗ ವಿಧಾನಸಭಾ ಚುನಾವಣೆ ನಡೆಯುತ್ತಿದೆ. ಮೊದಲ ಹಂತದ ಚುನಾವಣೆ ಶನಿವಾರ ಪೂರ್ಣಗೊಂಡಿದೆ. ಈ ನಡುವೆ 2009ರಲ್ಲಿ ಪಶ್ಚಿಮ ಬಂಗಾಳದ ಸಿಪಿಎಂ ನಾಯಕರೊಬ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಗಾಳದ ಟಿಎಂಸಿ ನಾಯಕ ಛತ್ರಧರ್ ಮಹತೊ ಅವರನ್ನು ಎನ್ಐಎ ಬಂಧಿಸಿದೆ.
ಶನಿವಾರ ಝಾರ್ಗ್ರಾಮ್ ಜಿಲ್ಲೆಯಲ್ಲಿ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಮತ ಚಲಾಯಿಸಿದ ಛತ್ರಧರ್ ಮಹತೊ ಅವರನ್ನು ಅವರ ನಿವಾಸದ ಬಳಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಅಧಿಕಾರಿಗಳು ಬಂಧಿಸಿದ್ದಾರೆ.
ಬಂಧಿಸಲಾಗಿರುವ ಮಹತೊ ಅವರನ್ನು ಝಾರ್ಗ್ರಾಮದ ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಹತೊ ಅವರು ಮಾವೋವಾದಿ ಬೆಂಬಲಿತ ಪೀಪಲ್ ಅಗೈನ್ಸ್ಟ್ ಪೊಲೀಸ್ ಅಟ್ರಾಸಿಟೀಸ್ (ಪಿಸಿಪಿಎ) ಸಂಘಟನೆಯ ಸಂಚಾಲಕರಾಗಿದ್ದರು. ಈ ಹಿನ್ನಲೆಯಲ್ಲಿ 2009ರಲ್ಲಿ ಸಿಪಿಎಂ ನಾಯಕ ಪ್ರಬೀರ್ ಮಹತೊ ಅವರ ಹತ್ಯೆಗೆ ಸಂಬಂಧಿಸಿದಂತೆ ಅವರನ್ನು ಬಂಧಿಸಲಾಗಿದೆ ಎಂದು ಎನ್ಐಎ ಅಧಿಕಾರಿಗಳು ತಿಳಿಸಿದ್ದಾರೆ.
Read Also: ಮಮತಾ ಬ್ಯಾನರ್ಜಿ BJP ಉಪಾಧ್ಯಕ್ಷನ ಸಹಾಯ ಕೇಳಿದ್ದಾರೆಂದು ಆರೋಪ; ಆಡಿಯೋ ಬಿಡುಗಡೆ ಮಾಡಿದ ಬಿಜೆಪಿ!