ಸ್ವಯಂ ಘೋಷಿತ ದೇವಮಾನವನಿಂದ ದುಶ್ಕೃತ್ಯ: ಆಶ್ರಮದಲ್ಲಿ ನಾಲ್ವರು ಮಹಿಳೆಯರ ಮೇಲೆ ಅತ್ಯಾಚಾರ
ಜೈಪುರದ ಆಶ್ರಮದಲ್ಲಿ ಸ್ವಯಂ ಘೋಷಿತ ದೇವಮಾನವನೊಬ್ಬ ತಮ್ಮ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಒಂದೇ ಕುಟುಂಬದ ಮೂವರು ಮಹಿಳೆಯರು ಸೇರಿದಂತೆ ನಾಲ್ಕು ಮಹಿಳೆಯರು ಆರೋಪಿಸಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಸತ್ಸಂಗ ಮತ್ತು ಇತರ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಆಶ್ರಮಕ್ಕೆ ಮಹಿಳೆಯರು ತೆರಳಿದ್ದಾಗ, ಅಲ್ಲಿನ ತಪಸ್ವಿ ಶೈಲೇಂದ್ರ ಮೆಹ್ತಾ ತಮ್ಮ ಮೇಲೆ ಅತ್ಯಾಚಾರ ಎಸಗಿರುವುದಾಗಿ ಮಹಿಳೆಯರು ಆರೋಪಿಸಿದ್ದಾರೆ ಎಂದು ಭಂಕ್ರೋಟ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಅಧಿಕಾರಿ ಮುಕೇಶ್ ಚೌಧರಿ ತಿಳಿಸಿದ್ದಾರೆ.
“ತಾವು ತಮ್ಮ ಕುಟುಂಬ ಸದಸ್ಯರೊಂದಿಗೆ ಹಲವಾರು ವರ್ಷಗಳಿಂದ ಆಶ್ರಮಕ್ಕೆ ಭೇಟಿ ನೀಡುತ್ತಿದ್ದಾರೆ ಎಂದು ಸಂತ್ರಸ್ತ ಮಹಿಳೆಯರು ಹೇಳಿದ್ದಾರೆ. ಮಹಿಳೆಯರು ಸೇವೆಯ ಹೆಸರಿನಲ್ಲಿ ಒಂದೆರಡು ದಿನ ಆಶ್ರಮದಲ್ಲಿದ್ದರು. ಈ ವೇಳೆ ಆರೋಪಿ ತಮ್ಮ ಮೇಲೆ ಅತ್ಯಾಚಾರ ಎಸಗಿದ್ದಾರೆ” ಎಂದು ಮಹಿಳೆಯರು ವಿವರಿಸಿದ್ದಾರೆ.
ಒಂದೇ ಕುಟುಂಬದ ಮೂವರು ಮಹಿಳೆಯರು ಮಂಗಳವಾರ ಪ್ರಕರಣ ದಾಖಲಿಸಿದ್ದರೆ, ನಾಲ್ಕನೇ ಮಹಿಳೆ ಬುಧವಾರ ದೂರು ನೀಡಿದ್ದಾರೆ.
ಸಂತ್ರಸ್ತೆಯೊಬ್ಬರ ಪತಿ ತಮ್ಮ ಮಗಳನ್ನು ಆಶ್ರಮಕ್ಕೆ ಕರೆದೊಯ್ಯಲು ಮುಂದಾದಾಗ ಈ ವಿಷಯ ಬೆಳಕಿಗೆ ಬಂದಿದೆ.
ಸಂತ್ರಸ್ತ ಮಹಿಳೆ ತಾವು ಆಶ್ರಮದಲ್ಲಿ ಎದುರಿಸದ ಅಗ್ನಿ ಪರೀಕ್ಷೆಯನ್ನು ವಿವರಿಸಿದಾಗ, ಅವಳ ಕುಟುಂಬದ ಇತರ ಇಬ್ಬರು ಮಹಿಳೆಯರು ತಾವು ಅತ್ಯಾಚಾರಕ್ಕೆ ಒಳಗಾಗಿರುವುದಾಗಿ ಹೇಳಿದ್ದಾರೆ. ನಂತರ ಕುಟುಂಬವು ಪ್ರಕರಣವನ್ನು ದಾಖಲಿಸಲು ನಿರ್ಧರಿಸಿದೆ” ಎಂದು ಅಧಿಕಾರಿ ಹೇಳಿದರು.
ಈ ಬಗ್ಗೆ ತನಿಖೆ ನಡೆಯುತ್ತಿದೆ ಮತ್ತು ಇನ್ನೂ ಯಾರನ್ನೂ ಬಂಧಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಪಂಚರಾಜ್ಯ ಚುನಾವಣೆ: ಬಿಜೆಪಿಯ ನಿರೀಕ್ಷೆ ಈಡೇರದಿದ್ದರೂ.. ಯೋಜನೆ ಫಲಿಸುತ್ತಿದೆ!