ಭೀಕರ ಮರ್ಯಾದಾಗೇಡು ಹತ್ಯೆ: ಸಹೋದರನ ಶಿರಚ್ಛೆದ ಮಾಡಿ, ಸೆಲ್ಫಿ ತೆಗೆದುಕೊಂಡ ಬಾಲಕ; ಬಂಧನ

ಭೀಕರ ಮರ್ಯಾದಾಗೇಡು ಹತ್ಯೆಯೊಂದು ಮಹಾರಾಷ್ಟ್ರದ ಔರಂಗಾಬಾದ್‌ ಜಿಲ್ಲೆಯಲ್ಲಿ ನಡೆದಿದೆ. ಅಪ್ರಾಪ್ತ ಬಾಲಕನೊಬ್ಬ ತನ್ನ ತಾಯಿಯ ಸಹಾಯ ಪಡೆದು ತನ್ನ ಸಹೋದರಿಯ ಶಿರಚ್ಛೆದ ಮಾಡಿ, ಮೃತದೇಹದೊಂದಿಗೆ ಸೆಲ್ಪಿ ತೆಗೆದುಕೊಂಡಿರುವ ಕ್ರೌರ್ಯ ಮರೆದಿರುವುದು ವರದಿಯಾಗಿದೆ.

19 ವರ್ಷದ ಯುವತಿ ತನ್ನ ಪ್ರೇಮಿಯೊಂದಿಗೆ ವಿವಾಹವಾಗಿ, ಆತನೊಂದಿಗೆ ಬದುಕುತ್ತಿದ್ದರು. ಆಕೆ ಗರ್ಭವತಿಯೂ ಆಗಿದ್ದರು. ಅವರ ಮನೆಗೆ ನುಗ್ಗಿದ ಆಕೆಯ ತಾಯಿ ಮತ್ತು ಸಹೋದರ ಆಕೆ ತಲೆಯನ್ನು ಕತ್ತರಿಸಿ ಹತ್ಯೆಗೈದಿದಿದ್ದಾರೆ. ಅಲ್ಲದೆ, ಆಕೆಯ ಪತಿಯ ಮೇಲೂ ದಾಲಿ ಮಾಡಲು ಯತ್ನಿಸಿದ್ದು, ಆಕೆಯ ಪತಿ ಹಲ್ಲೆಯಿಂದ ತಪ್ಪಿಸಿಕೊಂಡು, ಬಾಚಾವ್‌ ಆಗಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ತನ್ನ ಸಹೋದರಿಯನ್ನು ಕೊಂದ ನಂತರ ಬಾಲಕ, ತುಂಡರಿಸಿದ ತಲೆಯನ್ನು ವರಾಂಡಾಕ್ಕೆ ತೆಗೆದುಕೊಂಡು ಹೋಗಿ ತಾಯಿ ಜೊತೆಗೂಡಿ ಸೆಲ್ಫಿ ತೆಗೆದುಕೊಂಡಿದ್ದಾರೆ. ನಂತರ, ಎಲ್ಲರಿಗೂ ಕಾಣುವಂತೆ ಗಾಳಿಯಲ್ಲಿ ಮೃತದೇಹ ತಲೆಯನ್ನು ಬೀಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯಲ್ಲಿ ಹತ್ಯೆಗೀಡಾದ ಯುವತಿಯನ್ನು ಕೀರ್ತಿ ಥೋರ್ ಎಂದು ಗುರುತಿಸಲಾಗಿದೆ. ಅವರು ಜೂನ್‌ ತಿಂಗಳಿನಲ್ಲಿ ತಮ್ಮ ತವರು ಮನೆಯನ್ನು ತೊರೆದು ತನ್ನ ಪತಿಯೊಂದಿಗೆ ವಾಸಿಸುತ್ತಿದ್ದರು. ಆಕೆಯ ತಾಯಿ ಕಳೆದ ವಾರ ಆಕೆಯನ್ನು ಸಂಪರ್ಕಿಸಿ ಭೇಟಿಯಾಗುವುದಾಗಿ ಹೇಳಿದ್ದರು. ಹೀಗಾಗಿ, ಭಾನುವಾರ ತನ್ನ ಮಗನೊಂದಿಗೆ ಮಗಳ ಮನೆಗೆ ತೆರಳಿದ್ದರು.

ಇದನ್ನೂ ಓದಿ: ತನ್ನ ತಾಯಿಯೇ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾಳೆ ಎಂದು ದೂರು ನೀಡಿದ್ದ ಬಾಲಕ; ಪ್ರಕರಣ ವಜಾ

ಭಾನುವಾರದಂದು ಅವರು ಮಗಳ ಮನೆಗೆ ಬಂದಿದ್ದಾಗ ಪತಿ ಬೇರೆ ಕೋಣೆಯಲ್ಲಿದ್ದರು. ಅಂದು ಅವರು ಅನಾರೋಗ್ಯದಿಂದಾಗಿ ಅಸ್ವಸ್ಥರಾಗಿದ್ದರು. ತಾಯಿ ಮತ್ತು ಸಹೋದರನಿಗೆ ಟೀ ಮಾಡುತ್ತಿದ್ದಾಗ ಹಿಂಬದಿಯಿಂದ ಕೀರ್ತಿ ಮೇಲೆ ಹಲ್ಲೆ ನಡೆಸಲಾಗಿದೆ. ಆಕೆಯ ತಾಯಿ ಯುವತಿಯ ಕಾಲನ್ನು ಹಿಡಿದುಕೊಂಡಿದ್ದು, ಸಹೋದರನೂ ತನ್ನೊಂದಿಗೆ ತಂದಿದ್ದ ಕುಡುಗೋಲಿನಿಂದ ತಲೆಯನ್ನು ಕತ್ತರಿಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಷ್ಟೇ ಅಲ್ಲದೆ ಅಕ್ಕಪಕ್ಕದ ಮನೆಯವರು ನೋಡಲೆಂದು ತಲೆಯನ್ನು ಹೊರಕ್ಕೆ ಕೊಂಡೊಯ್ದಿದ್ದಾರೆ ಎನ್ನಲಾಗಿದೆ.

ಆರೋಪಿಗಳು ವಿರ್ಗೋನ್ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದು, ಇದೀಗ ಬಂಧನಕ್ಕೆ ಒಳಗಾಗಿದ್ದಾನೆ.

ರಾಜ್ಯದಲ್ಲೂ ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಇಂತಹ ಹತ್ತೆನ್ನರಡು ಘಟನೆಗಳು ನಡೆದಿದ್ದು, ಜೂನ್‌ ತಿಂಗಳೊಂದರಲ್ಲಿಯೇ ನಾಲ್ಕು ಘಟನೆಗಳು ನಡೆದಿರುವುದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇಂತಹ ಘಟನೆಗಳು ಹೆಚ್ಚುತ್ತಿದ್ದರೂ ಸರ್ಕಾರಗಳು ಇಂತಹ ಕ್ರೌರ್ಯಗಳನ್ನು ತಡೆಗಟ್ಟುವತ್ತ ಗಮನ ಹರಿಸದೇ ಇರುವುದು ಬೇಸರದ ಸಂಗತಿ.

ಈ ದೇಶದ ಕ್ರೂರ, ಕರಾಳ ಜಾತಿವ್ಯವಸ್ಥೆಯ ಬಲೆಯಲ್ಲಿ ಸಿಕ್ಕಿಕೊಂಡ ಸಾವಿರಾರು ತಂದೆ ತಾಯಿಯರು ತಮ್ಮ ಮಗಳು ಅನ್ಯಜಾತೀಯ ಯುವಕನನ್ನು ಪ್ರೀತಿಸಿದರೆಂಬ ಏಕೈಕ ಕಾರಣಕ್ಕೆ ಮಗಳನ್ನೇ ಅಮಾನವೀಯವಾಗಿ ಕೊಂದುಹಾಕಿ ಜೈಲು ಸೇರಿದ್ದಾರೆ. ಮರ್ಯಾದೆ ಉಳಿಸಿಕೊಳ್ಳಲು ಕೊಲೆ ಎಂಬ ಅಹಂಕಾರ, ಗರ್ವಕ್ಕೆ ತಮ್ಮ ಮಗಳ ಜೀವನದೊಂದಿಗೆ ತಮ್ಮ ಜೀವನವನ್ನು ನರಕ ಮಾಡಿಕೊಂಡಿದ್ದಾರೆ. ಇದುವರೆಗೂ ತನ್ನ ಮಗಳನ್ನು ಕೊಂದ ಒಬ್ಬ ಅಪ್ಪ-ಅಮ್ಮನು ನೆಮ್ಮದಿಯಾಗಿಲ್ಲ ಎಂಬುದು ಸತ್ಯ. ಹಾಗಾಗಿ ಇದರ ವಿರುದ್ಧ ಜಾಗೃತಿ ಅತಿ ಹೆಚ್ಚು ಅಗತ್ಯವಾಗಿದೆ.

ಇದನ್ನೂ ಓದಿ: ಬಾಲಕನ ಮೇಲೆ ಸಾಮೂಹಿಕ ಅತ್ಯಾಚಾರ; ಬರ್ಬರ ಕೊಲೆ: ಅಪರಾಧಿಗಳಿಗೆ ಕೆಮಿಕಲ್‌ ಕ್ಯಾಸ್ಟ್ರೇಶನ್‌ ಶಿಕ್ಷೆ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights