ಫ್ಯಾಕ್ಟ್ಚೆಕ್: 1857ರ ದಂಗೆಯಲ್ಲಿ ಹೋರಾಡಿದ ಗಂಗಪ್ಪ ವಾಲ್ಮೀಕಿ ಎಂಬ ಯೋಧನನ್ನು ಕನ್ನಡ ನಾಡು ಮರೆತಿದೆಯೇ?
“ಈ ಚಿತ್ರದಲ್ಲಿರುವ ಸ್ವಾತಂತ್ರ್ಯ ಸೇನಾನಿಯ ಹೆಸರು ಗಂಗಪ್ಪ ವಾಲ್ಮೀಕಿ. ಏಕಾಂಗಿಯಾಗಿ ಹೋರಾಡಿ ಬರೋಬ್ಬರಿ 200 ಬ್ರಿಟಿಷರ ಹೆಣ ಉರುಳಿಸಿದ್ದರು. 1859 ಸೆಪ್ಟೆಂಬರ್ 18 ರಂದು ಇವರನ್ನು ಖಾನಾಪುರದ ನಡುರಸ್ತೆಯಲ್ಲಿ ಗಲ್ಲಿಗೇರಿಸಲಾಯಿತು. ದೌರ್ಭಾಗ್ಯ ಏನೆಂದರೆ ಇವರು ಯಾವ ಇತಿಹಾಸದ ಪುಟ ಸೇರಿಲ್ಲ. ಎಂದು ಬರೆಯಲಾಗಿದೆ.
ಫೋಟೋದಲ್ಲಿರುವ ವ್ಯಕ್ತಿ ಯಾರು?
ಭಾರತದ ಸ್ವಾತಂತ್ರ ಸಂಗ್ರಾಮದಲ್ಲಿ ಇಂತಹ ಉದಾತ್ತ ಧ್ಯೇಯದೊಂದಿಗೆ ಹೋರಾಡಿ ವೀರ ಮರಣವನ್ನಪ್ಪಿರುವ ಕನ್ನಡಿಗನ ಇತಿಹಾಸದ ಬಗ್ಗೆ ತಿಳಿಯೋಣವೆಂದು ಗೂಗಲ್ ನಲ್ಲಿ ಸರ್ಚ್ ಮಾಡಿ ಪರಿಶೀಲಿಸಿದಾಗ, ಫೊಟೋದಲ್ಲಿರುವ ವ್ಯಕ್ತಿ ಹೆಸರು “ಮಾತಾದಿನ್ ಭಂಗಿ” ಎಂಬ ಮಾಹಿತಿ ಲಭ್ಯವಾಗಿದ್ದು ಈ ಕುರಿತು ನ್ಯೂಸ್ ಚೆಕ್ಕರ್ ವರದಿ ಮಾಡಿದೆ.
ಯೂಟ್ಯೂಬ್ನಲ್ಲಿ ಕಂಡುಬರುವ ವೀಡಿಯೊದ ಪ್ರಕಾರ, ಬ್ರಿಟಿಷರು ಮಾತಾದಿನ್ ಮೆಹ್ತಾರ್ ಅವರನ್ನು ಕ್ರಾಂತಿಯನ್ನು ಪ್ರಚೋದಿಸಿದ ಪ್ರಮುಖ ಆರೋಪಿಯನ್ನಾಗಿ ಮಾಡಿದರು, ನಂತರ ಅವರನ್ನು ಗಲ್ಲಿಗೇರಿಸಲಾಯಿತು. ಆದರೆ ಅವರು 200 ಬ್ರಿಟಿಷರನ್ನು ಕೊಂದ ವಿಷಯದ ಬಗ್ಗೆ ಯಾವುದೇ ಉಲ್ಲೇಖವಿಲ್ಲ.
Indian Mutiny Rebel Gungoo Mehter who was tried at Kanpur for killing many of the #SatiChaura survivors, including many women and children. He was convicted and hanged at Kanpur on 8 September 1859.#GungooMehter #SepoyMutiny #IndianRebellion #UprisingOf1857 pic.twitter.com/RbNTf5u21c
— Heritage Times (@HeritageTimesIN) May 20, 2018
ಇಲ್ಲಿ ಒಂದು ಅಂಶವನ್ನು ಗಮನಿಸಬೇಕು ಅದೇನೆಂದರೆ, ಈತನ ಹೆಸರನ್ನು ಮಾತಾದಿನ್ ಭಂಗಿ, ಮಾತಾದಿನ್ ಮೆಹ್ತಾರ್ ಮತ್ತು ಗಂಗೂ ಮೆಹ್ತಾರ್ ಎಂದು ಉಲ್ಲೇಖಿಸಲಾಗಿದೆ. ಭಾರತದ ಮೊದಲ ಸ್ವಾತಂತ್ರ್ಯ ಹೋರಾಟದ ವೀರ ಮಂಗಲ ಪಾಂಡೆಯನ್ನು ಬ್ರಿಟಿಷರ ವಿರುದ್ದ ಅಣಿನೆರಸಿದ್ದು ಇದೇ ಮತದಿನ್ ಭಂಗಿ ಎನ್ನಲಾಗಿದೆ.
ಮಾತಾದಿನ್ ಭಂಗಿ ಅವರ ಪುಣ್ಯಸ್ಮರಣೆಯಂದು 2020 ಏಪ್ರಿಲ್ 7 ರಂದು ಪ್ರಿಯಾಂಕ ಗಾಂಧಿ ವಾದ್ರಾ ತಮ್ಮ ಫೇಸ್ಬುಕ್ ನಲ್ಲಿ ಪೋಸ್ಟ್ ಹಾಕುವ ಮೂಲಕ ಮತದಿನ್ ಭಂಗಿ ಅವರಿಗೆ ಹುತಾತ್ಮ ದಿನದ ನಮನಗಳನ್ನು ಸಲ್ಲಿಸಿದ್ದರು. ಅದನ್ನು ಇಲ್ಲಿ ನೋಡಬಹುದು.
ಸಾಮಾಜಿಕ ಮಾಧ್ಯಮಗಳಲ್ಲಿ ಗಂಗಪ್ಪ ವಾಲ್ಮಿಕಿ ಎಂದು ಉಲ್ಲೇಖಿಸಿರುವ ವ್ಯಕ್ತಿ ಹೆಸರು ಮಾತಾದಿನ್ ಭಂಗಿ ಎಂದು ಉಲ್ಲೇಖಿಸಲಾಗಿದ್ದು, 1857ರ ಹೋರಾಟದಲ್ಲಿ ಭಾಗವಹಿಸಿ 1859ರವರೆಗೂ ಮಂಗಲ್ ಪಾಂಡೆಯೊಂದಿಗೆ ಜೊತೆಯಾಗಿದ್ದರು. 1859 ರಲ್ಲಿ ಬ್ರಿಟಿಷರು ಮಾತಾದಿನ್ ಭಂಗಿ (ಗಂಗೂ ಮೆಹ್ತರ್) ಅವರನ್ನು ಗಲ್ಲಿಗೇರಿಸಿದರು.
ಭಾರತಕ್ಕೆ ಸ್ವಾತಂತ್ರ್ಯವನ್ನು ತಂದುಕೊಡಲು ಹೋರಾಡಿದ ಪ್ರತಿಯೊಬ್ಬರನ್ನು ಈ ನಾಡು ಸ್ಮರಿಸಬೇಕು ನಿಜ, ಆದರೆ ಸ್ಮರಿಸುವ ಬರದಲ್ಲಿ ಸುಳ್ಳ ಇತಿಹಾಸವನ್ನು ಸೃಷ್ಟಿಸಿ ಜನರನ್ನು ಧಿಕ್ಕು ತಪ್ಪಿಸಬಾರದು. ಈಗಾಗಲೇ ಸುಳ್ಳು ಇತಿಹಾಸವನ್ನು ಸೃಷ್ಟಿಸಿ ಮೂಲವನ್ನೆ ನಾಶ ಮಾಡುವ ಪ್ರವೃತ್ತಿ ಹೆಚ್ಚುತ್ತಿರುವ ಸಂದರ್ಭದಲ್ಲಿ ಇಂತಹ ಪೋಸ್ಟ್ಗಳು ಇನ್ನಷ್ಟು ಅನಾಹುತ ಮಾಡುತ್ತವೆ.
ಒಟ್ಟಾರೆಯಾಗಿ ಹೇಳುವುದಾದರೆ, ಫೇಸ್ಬುಕ್ನಲ್ಲಿ ಬಲಪಂಥೀಯ ಪ್ರತಿಪಾದಕರು ಹಂಚಿಕೊಂಡಿರುವ ಪೋಸ್ಟ್ಗಳಲ್ಲಿ ಹೇಳಿರುವಂತೆ ಗಂಗಪ್ಪ ವಾಲ್ಮೀಕಿ ಎಂಬುವ ಯಾವ ವ್ಯಕ್ತಿಯು 1857ರ ಪ್ರಥಮ ಸ್ವಾತಂತ್ರ ಸಂಗ್ರಾಮದಲ್ಲಿ ಇರಲಿಲ್ಲ. ಮತ್ತು ಅವರು ಕನ್ನಡಿಗರಾಗಿದ್ದು 200 ಬ್ರಿಟಿಷ್ ಸೈನಿಕರನ್ನು ಹತ್ಯೆ ಮಾಡಿದ್ದಾರೆ ಎಂಬುದಕ್ಕೆ ಆಧಾರಗಳಿಲ್ಲ. ಇಂತಹ ಆಧಾರ ರಹಿತ ಪೋಸ್ಟ್ಗಳನ್ನು ಹಾಕುವ ಮೂಲಕ ಕನ್ನಡ ಪರ ಸಂಘಟನೆಗಳನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದು ಸರಿಯಲ್ಲ.
ರಾಘವೇಂದ್ರ ಹಾಸನ
ಏನ್ಸುದ್ದಿ.ಕಾಂ
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ: ಫ್ಯಾಕ್ಟ್ಚೆಕ್: ಪಠಾಣ್ ಚಿತ್ರದ ಬಗ್ಗೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದು ನಿಜವೇ?